ಕನ್ನಡ ಕಿರುತೆರೆರಂಗದಲ್ಲಿರುವ ಕಲಾವಿದರು ತಂತ್ರಜ್ಞರು ಎಲ್ಲರ ಹಿತ ಕಾಯುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ. ಸಂಘಟನೆಯನ್ನು ಸುಧಾರಿಸಲು ಪ್ರಸ್ತುತ ತಂತ್ರಜ್ಞಾನದಲ್ಲಿ ಇರುವ ಹೇರಳ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಈ ಕೆಟಿವಿಎ ಆಪ್ ಪ್ರಾರಂಭಿಸಲಾಗುತ್ತಿದೆ.
ಕನ್ನಡದ ಹಿರಿತೆರೆ ಉದ್ಯಮಕ್ಕಿಂತ ಹೆಚ್ಚಾಗಿ ಕಿರುತೆರೆಯನ್ನೇ ಹೆಚ್ಚು ಜನ ಕಲಾವಿದರು ತಂತ್ರಜ್ಞರು ಆಶ್ರಯಿಸಿದ್ದಾರೆ. ವ್ಯಾಪಾರದ ದೃಷ್ಟಿಯಿಂದಲೂ ಹಿರಿತೆರೆಗಿಂತ ಕಿರುತೆರೆ ಹೆಚ್ಚು ವಿಸ್ತಾರಗೊಂಡಿದೆ. ಆದರೆ ಈ ಉದ್ಯಮವು ಅಸಂಘಟಿತ ವಲಯದಲ್ಲಿ ಇದ್ದುದರಿಂದ ಈ ರಂಗವನ್ನೇ ನೆಚ್ಚಿಕೊಂಡಿರುವ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಯಾರಿಗಾದರೂ ತೊಂದರೆಯಾದರೆ ನೆರವಿಗೆ ಧಾವಿಸುವುದಕ್ಕಾಗಲೀ, ಸರ್ಕಾರದಿಂದ ಕಷ್ಟವಾಗಲೀ, ಸೂಕ್ತ ಸಮಯದಲ್ಲಿ ವಿಮೆ ಮತ್ತು ವೈದ್ಯಕೀಯ ನೆರವು ಪಡೆಯುವುದಕ್ಕಾಗಲೀ, ಉದ್ಯಮದ ಆಗುಹೋಗುಗಳ ಕುರಿತು ಸಮಗ್ರವಾಗಿ ಎಲ್ಲರೊಂದಿಗೆ ಹಂಚಿಕೊಳ್ಳಲಾಗಲೀ... ಸೂಕ್ತ ಮಾಧ್ಯಮದ ಕೊರತೆಯಿದೆ.
ಹೀಗಾಗಿ ಕನ್ನಡ ಕಿರುತೆರೆ ರಂಗದ ಎಲ್ಲರ ಕ್ಷೇಮಾಭಿವೃದ್ದಿಗಾಗಿ ಮತ್ತು ಸೂಕ್ತ ಸಂವಹನಕ್ಕಾಗಿ ಈ ಕೆಟಿವಿಎ ಆಪ್ ರೂಪುಗೊಳ್ಳುತ್ತಿದೆ.
ಅಪ್ಡೇಟ್ ದಿನಾಂಕ
ಜುಲೈ 6, 2023