Shivayogi siddarameshwara kannada vachana collection ಶಿವಯೋಗಿ ಸಿದ್ಧರಾಮರ ವಚನ
ಸಿದ್ದರಾಮೇಶ್ವರನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣ. ಇತ್ತೀಚಿನ ಸಂಶೋಧನೆಯ ಪ್ರಕಾರ ಸಿದ್ಧರಾಮರು ಹುಟ್ಟಿದ್ದು ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸೊನ್ನಲಿಗೆ ಗ್ರಾಮ. ಸೊನ್ನಲಿಗೆಯ ಮೊರಡಿಯ ಮುದ್ದುಗೌಡ, ತಾಯಿ ಸುಗ್ಗವ್ವೆ ಎಂಬ ಕುಡು ಒಕ್ಕಲಿಗರ ಕುಟುಂಬದಲ್ಲಿ ಜನಿಸಿದರು. ಸಿದ್ದರಾಮೇಶ್ವರನ ಕಸುಬು ಸೊನ್ನಲಿಗೆ/ಸೊನ್ನಲಾಪುರದಲ್ಲಿ ಜನರನ್ನು ಒಗ್ಗೂಡಿಸಿಕೊಂಡು ಸಮುದಾಯದ ಬದುಕಿಗೆ ಒಳಿತನ್ನು ಉಂಟುಮಾಡುವ ಕೆರೆಕಟ್ಟೆ, ಬಾವಿ, ಅರವಟ್ಟಿಗೆ ಮತ್ತು ಇತರ ಕೆಲಸಗಳನ್ನು ಮಾಡುವ ನೇತಾರನಾಗಿದ್ದನು. ಸಿದ್ದರಾಮೇಶ್ವರನ ವಚನಗಳ ಅಂಕಿತನಾಮ ಕಪಿಲಸಿದ್ಧಮಲ್ಲಿಕಾರ್ಜುನಾ /ಕಪಿಲಸಿದ್ಧಮಲ್ಲಿಕಾರ್ಜನಲಿಂಗ.
For any issues / concerns / feedback please reach out to us at vishaya.in@gmail.com OR contact form in https://vishaya.in
ಅಪ್ಡೇಟ್ ದಿನಾಂಕ
ಜುಲೈ 5, 2024