ಸೌಜನ್ಯ ದತ್ತರಾಜ ಅವರ ಕಥಾಸಂಕಲನವು ನಗರಜೀವನದ ಹೆಣ್ಣುಮಕ್ಕಳ ಬದುಕಿನ ಹೊಸತೊಂದು ಲೋಕವನ್ನು ನಮಗೆ ಪರಿಚಯಿಸುತ್ತದೆ. ಲೇಖಕಿಯ ದೃಷ್ಟಿಕೋನ, ಭಾವನೆಗಳು, ಸಮಸ್ಯೆಯ ಬುಡದಲ್ಲೇ ಕಂಡುಕೊಳ್ಳುವ ಪರಿಹಾರಗಳು ವಿಶಿಷ್ಟವೆನಿಸುತ್ತವೆ.
ಇಲ್ಲಿನ ಪಾತ್ರಗಳ ಮೂಲಕ ಆಧುನಿಕ ಸ್ತ್ರೀಯರ ಅನೇಕ ಸಮಸ್ಯೆ, ಸಂಕೀರ್ಣತೆ ಮತ್ತು ನಿರೀಕ್ಷೆಗಳಿಗೆ ಈ ಕೃತಿಯಲ್ಲಿ ಸೌಜನ್ಯ ಕಥಾರೂಪ ಕೊಟ್ಟಿದ್ದಾರೆ.
"ಅರುಣೋದಯ", "ಜಡೆ", "ಮಂಥನ", "?....!", "ಆಯ್ಕೆ" ಕಥೆಗಳಲ್ಲಿ ಲೇಖಕಿಯ ನವೀನ ಚಿಂತನೆಯ ಹೊಳಹು ಮಿಂಚುವುದನ್ನು ಕಾಣಬಹುದು.