ಕನ್ನಡಿಯಲ್ಲಿ ಕಂಡಾತ: Kannadiyalli Kandaata

· B Malini Mallya
5,0
1 ຄຳຕິຊົມ
ປຶ້ມອີບຸກ
320
ໜ້າ

ກ່ຽວກັບປຶ້ມ e-book ນີ້

ನನ್ನ ಲೇಖನ ವ್ಯವಸಾಯ ಹೆಚ್ಚಾಗಿ ಬೆಳೆದು ಬಂದದ್ದು, ನಾನಾ ರೂಪ ತಾಳಿದ್ದು ೧೯೩೩ರಿಂದ ೧೯೭೩ರ ತನಕ ನಾನು ವಾಸಿಸುತ್ತಿದ್ದ ಪುತ್ತೂರಿನ ಬಾಲವನ ವೆಂಬ ತಾವಿನಲ್ಲಿ. ಅಲ್ಲಿನ ಗುಡ್ಡದ ಮೇಲೊಂದು ಮನೆಯನ್ನು ಕಟ್ಟಿ, ಅದರ ಉಪ್ಪರಿಗೆಯೊಳಗೆ ಕುಳಿತು, ನಾಲ್ಕು ಸುತ್ತಿನ ಬೆಟ್ಟ, ಬಾನು, ಗಿಡ, ಮರಗಳ ಸೊಬಗುಗಳನ್ನು ಬರೆಯುವ ಕಾಲಕ್ಕೆ ಸಂಪೂರ್ಣ ಮರೆತು--ಮನಸ್ಸಿಗೆ ತೋಚಿದ್ದನ್ನು ಬರೆಯುತ್ತಿದ್ದೆ ಅಥವಾ ಬಾಯಿಂದ ಹೇಳಿ ಬರೆಯಿಸುತ್ತಿದ್ದೆ. ಅದು ನನ್ನ ಸ್ವಂತ ಸ್ಥಳವಾಗಿದ್ದರೂ ಕಾರಣಾಂತರದಿಂದ ಆ ಸ್ಥಳವನ್ನು ಬಿಟ್ಟು ಈಗ ನನ್ನ ಹುಟ್ಟೂರಿನ ಸಮತಟ್ಟಾದ ನೆಲಕ್ಕೆ ಬಂದು ಸೇರಿಕೊಂಡಿದ್ದೇನೆ. ಇಲ್ಲಿನ ನಿಸರ್ಗವೂ ಸುಂದರವೇ. ನೆಲ ಸಮತಟ್ಟಾಗಿದ್ದರೂ--ಜನರ ಬುದ್ಧಿ ಸಮತಟ್ಟಾಗಿರಬೇಕಿಲ್ಲದ ಕಾರಣ ಕಾದಂಬರಿಕಾರನಿಗೆ ಮುಗಿಯದಷ್ಟು ವಿಷಯಗಳು ದೊರಕುತ್ತವೆ. ಹಾಗಾಗಿ ಆ ಕೊರತೆಯಿಲ್ಲ. ಸುದೈವದಿಂದ ಒಬ್ಬರು ಮಿತ್ರರು, ನಾನು ವಾಸ ಮಾಡಲು ಒಂದು ಚಂದದ ಮನೆಯನ್ನು ಕಟ್ಟಿಸಿ, ಮಹಡಿಯಲ್ಲೊಂದು ಕೋಣೆಯನ್ನು ಕಟ್ಟಿಸಿಕೊಟ್ಟು ನನ್ನ ಮಾರ್ಜಾಲ ತಪಸ್ಸಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ಕೊರತೆಯೊಂದೇ. ಪುತ್ತೂರಿನ ಮನೆಯಲ್ಲಿ ದಾರಿಯ ಸದ್ದು ಕೇಳಿಸುವುದು ಕಡಿಮೆ. ಮನೆಯಲ್ಲೂ ಸದ್ದುಗದ್ದಲ ಕಡಿಮೆ. ಇಲ್ಲಿ ಮಾತ್ರ ಆ ಕೊರತೆಯಿದೆ. ಹೆದ್ದಾರಿಯ ಬಳಿಯ ಮನೆಯಾದುದರಿಂದ ವಾಹನಸಂಚಾರ ದಿನರಾತ್ರಿಯೂ ಇರುತ್ತದೆ. ಪ್ರಾಣಾಪಾಯ ಬಂದಿದೆ--ಎಂದು ಸೂಚಿಸುವ ಚೀತ್ಕಾರಗಳು ಸದಾ ಕೇಳಿಸುತ್ತವೆ. ಒಮ್ಮೆ ಬರವಣಿಗೆಯಲ್ಲಿ ಮುಳುಗಿದೆನಾದರೆ ಅವೆಲ್ಲ ಮರೆಯುತ್ತವೆನ್ನಿ. ಆದರೂ ನಡುನಡುವೆ ಅಡುಗೆಭಟ್ಟರ ಅಸ್ತಿತ್ವ ಎಚ್ಚರಿಕೆ ಕೊಡುತ್ತದೆ. ಪಾತ್ರೆ ಪರಡಿಗಳನ್ನು ಎಸೆದು ಜಲತರಂಗದಂತೆ--ತಪ್ಪಲೆತರಂಗ ಹೊರಡುತ್ತದೆ. ತಾವೊಬ್ಬರೇ ಇದ್ದರೂ ತಮ್ಮ ಅಸ್ತಿತ್ವವನ್ನು ಜಗತ್ತಿಗೆ ಸಾರಲು ಗಂಟಲನ್ನು ಗಟ್ಟಿಯಾಗಿ ತೆರೆಯುತ್ತಾರೆ. ಅದೂ ರೂಢಿಯಾಗುತ್ತ ಬಂದಿದೆ. ಈ ಆವರಣದಲ್ಲಿ ನನ್ನ ಲೇಖನವೃತ್ತಿಯನ್ನು ನಿಲ್ಲಿಸಿಲ್ಲ. ವರ್ಷಕ್ಕೊಂದಾದರೂ ಕಾದಂಬರಿಯನ್ನು ಬರೆಯುವ ಚಟ ಉಳಿದಿದೆ. ಈ ವರ್ಷದ ಕೃತಿಯಾಗಿ ಕಳೆದ ಬೇಸಿಗೆಯಲ್ಲಿ ಇದರ ಜತೆಗಿರುವ ಕಾದಂಬರಿಯನ್ನು ಬರೆದು ಮುಗಿಸುತ್ತೇನೆ. ಈ ಕಾದಂಬರಿಯಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆ ಯೇನಿಲ್ಲ. ಆದರೂ ಒಬ್ಬಾತ ತನಗೆ ತಾನೇ ಒಂದು ಸಮಸ್ಯೆಯಾಗಿ, ತನ್ನವರಿಗೆ ಮತ್ತಷ್ಟು ದೊಡ್ಡ ಸಮಸ್ಯೆಯಾಗಿ ಹೇಗೆ ಪರಿಣಿಸಬಹುದೆಂದು ವ್ಯಕ್ತಿಚಿತ್ರಣವಿದೆ.


ಇಂಥ ಜೀವಿಗಳಿಗೆ ಬದುಕಿನಲ್ಲಿ ತಾನು, ಇಲ್ಲವೆ ಸ್ವಾರ್ಥ ಮುಖ್ಯ. ಆ ದೃಷ್ಟಿಯಿಂದ ಅವರು ಲೋಕವನ್ನು ಅಳೆದು ಬಾಳುತ್ತಾರೆ; ವರ್ತಿಸುತ್ತಾರೆ. ಹಾಗೆ ನಡೆಯುವಾಗ ತಮಗಿಷ್ಟ ಕಂಡ ರೀತಿಯಲ್ಲಿ ಜೀವನಪ್ರವಾಹ ಸರಿಯದೆ ಹೋದರೆ ಲೋಕದ ಮೇಲೆ ಮುನಿದು, ಆ ಮುನಿಸಿಗೆ ವೈರಾಗ್ಯದ ಮುಖವಾಡ ತೊಡಿಸಿ, ತನ್ನವರನ್ನು ಬೆದರಿಸಲು ಯಾತ್ರೆ ಹೊರಡುತ್ತಾರೆ. ಅಂಥ ಒಬ್ಬ ವ್ಯಕ್ತಿ ಇಲ್ಲಿನ ಶಾಲಾ ಮಾಸ್ತರ ಪರಮೇಶ್ವರ. ಅವನ ವಿದ್ವೇಷಕ್ಕೆ ಗುರಿಯಾದ ಜಗತ್ತಿಗೆ ಅವನ ನಿರ್ಗಮನದಿಂದ ಸಾಕಷ್ಟು ಸುಖ ದೊರೆಯುತ್ತದೆ. ಅವನು ಮಾತ್ರ ಕಡಲಲ್ಲಿ ಎಸೆದ ಕಟ್ಟಿಗೆ ತುಂಡಿನಂತೆ ದಡ ಸೇರುವ ತನಕವೂ ಅಲೆಗಳ ಅಪ್ಪಳಿತಕ್ಕೆ ಗುರಿಯಾಗಲೇ ಬೇಕಾಗುತ್ತದೆ. ಮನುಷ್ಯರಿಲ್ಲದ ದಡವನ್ನು ಆತ ಸೇರಲಾರ. ತಿರುಗಿ ಅವರಿರುವ ದಡವನ್ನೇ ಸೇರಿ, ತನ್ನ ಪೂರ್ವಜೀವನವನ್ನು ಅನ್ಯರ ನಡವಳಿಕೆಯ ಕನ್ನಡಿಯಲ್ಲಿ ನೋಡಿ ಚಿಂತಿಸುವ ಅವಕಾಶ ಸಿಗುತ್ತದೆ. ಒಡೆದೊಂದು ಕನ್ನಡಿ ಮೊದಲಿನಂತಾಗ ದಾದರೂ, ಅದರ ಚೂರುಗಳ್ನು ಒಟ್ಟುಗೂಡಿಸಿ ಮುಖ ನೋಡಿ, ತನ್ನ ಆಕಾರವನ್ನೊ, ವಿಕಾರವನ್ನೊ ಗುರುತಿಸುವ ಸಾಧನವನ್ನಾಗಿ ಮಾಡಿಕೊಳ್ಳಬಹುದಲ್ಲ. ಪರಮೇಶ್ವರ ಹಾಗೆ ಮಾಡಿದ. ಎಲ್ಲರೂ ಹಾಗೆ ಮಾಡುತ್ತಾರೆ; ಮಾಡಬಲ್ಲರು ಎಂದಲ್ಲ. ಅವನ ಪಾಲಿಗಿದಿರಾದ ಬದುಕು ಅವನಿಂದ ಹಾಗೆ ಮಾಡಿಸಿತು. ಹಾಗೆ ಮಾಡಲು ಅವನು ಪ್ರತಿಕೂಲನಾಗಿ ವರ್ತಿಸದಿದ್ದುದು ಒಂದು ಕಾರಣ. ತನ್ನ ಸ್ವಾರ್ಥದ ಇತಿಮಿತಿಗಳು ಅವನಿಗೆ ಹೊಳೆದದ್ದು ಮತ್ತೊಂದು ಕಾರಣ.


ಹೀಗೆ, ಈ ಮುನ್ನುಡಿಯಲ್ಲಿ ಬರೆದ ಕತೆಯ ಗುಟ್ಟನ್ನೆಲ್ಲ ನಿಮ್ಮ ಮುಂದಿಟ್ಟುದರಿಂದ ನೀವು ಅದನ್ನು ಮಗುಚಿ ಓದುವ ಗೋಜಿಗೆ ಹೋಗದೆಯೆ ಉಳಿಯುವುದೂ ಸಾಧ್ಯ--ಎಂದು ಸೂಚಿಸಿ ವಿರಮಿಸುತ್ತೇನೆ.


ಇತಿ

ಶಿವರಾಮ ಕಾರಂತ

ಸಾಲಿಗ್ರಾಮ (ದಕ್ಷಿಣ ಕನ್ನಡ)

ನವೆಂಬರ್‌ ೯, ೧೯೭೫

ການຈັດອັນດັບ ແລະ ຄຳຕິຊົມ

5,0
1 ຄຳຕິຊົມ

ກ່ຽວກັບຜູ້ຂຽນ

Kota Shivaram Karanth was a Kannada writer, social activist, environmentalist, Yakshagana artist, film maker and thinker. Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.


Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.


He has received several literary awards. Namely, Jnanpith Award, Padma Bhushan, Sahitya Academy award and Pampa Award.


He passed away on 9th December 1997 in Manipal, Karnataka.

ໃຫ້ຄະແນນ e-book ນີ້

ບອກພວກເຮົາວ່າທ່ານຄິດແນວໃດ.

ອ່ານ​ຂໍ້​ມູນ​ຂ່າວ​ສານ

ສະມາດໂຟນ ແລະ ແທັບເລັດ
ຕິດຕັ້ງ ແອັບ Google Play Books ສຳລັບ Android ແລະ iPad/iPhone. ມັນຊິ້ງຂໍ້ມູນໂດຍອັດຕະໂນມັດກັບບັນຊີຂອງທ່ານ ແລະ ອະນຸຍາດໃຫ້ທ່ານອ່ານທາງອອນລາຍ ຫຼື ແບບອອບລາຍໄດ້ ບໍ່ວ່າທ່ານຈະຢູ່ໃສ.
ແລັບທັອບ ແລະ ຄອມພິວເຕີ
ທ່ານສາມາດຟັງປຶ້ມສຽງທີ່ຊື້ໃນ Google Play ໂດຍໃຊ້ໂປຣແກຣມທ່ອງເວັບຂອງຄອມພິວເຕີຂອງທ່ານໄດ້.
eReaders ແລະອຸປະກອນອື່ນໆ
ເພື່ອອ່ານໃນອຸປະກອນ e-ink ເຊັ່ນ: Kobo eReader, ທ່ານຈຳເປັນຕ້ອງດາວໂຫຼດໄຟລ໌ ແລະ ໂອນຍ້າຍມັນໄປໃສ່ອຸປະກອນຂອງທ່ານກ່ອນ. ປະຕິບັດຕາມຄຳແນະນຳລະອຽດຂອງ ສູນຊ່ວຍເຫຼືອ ເພື່ອໂອນຍ້າຍໄຟລ໌ໄໃສ່ eReader ທີ່ຮອງຮັບ.