ಪದ್ಮನಾಭ ಭಟ್ ಶೇವ್ಕಾರ ಅವರ ಎರಡನೆಯ ಕಥಾಸಂಕಲನ. ಉತ್ತರ ಕನ್ನಡ ಜಿಲ್ಲೆ ಮತ್ತು ಬೆಂಗಳೂರಿನ ನಡುವೆ ಚೆಲ್ಲಿ ಹೋದ ಹಲವು ಜೀವಗಳ ಅಪರೂಪದ ಕಥನಗಳು ಇಲ್ಲಿ ನಮಗೆ ದಕ್ಕುತ್ತವೆ. ಅವರ ಹಿಂದಿನ ಕಥಾಸಂಕಲನ ’ಕೇಪಿನಡಬ್ಬಿ’ - ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡು ಓದುಗರ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತ್ತು.