ಚುಟುಕು ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮತ್ತು ರಾಜ ಮಾರ್ಗದಲ್ಲಿ ಮುನ್ನಡೆಸುವ ಪ್ರಯತ್ನದಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಚಿದಾನಂದಗೌಡರ ಪಾತ್ರ ಮಹತ್ತರವಾದುದು.
ಅಲಕ್ಷಿತವಾಗಿದ್ದ ಚುಟುಕು ಸಾಹಿತ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯ ನಿರೀಕ್ಷೆ ಇಲ್ಲದೇ ಹಗಲಿರುಳು ಶ್ರಮಿಸುತ್ತಿರುವ ಅಗ್ರ ಪಂಕ್ತಿಯ ಸಾಹಿತಿಗಳ ಸಾಲಿನಲ್ಲಿ ಡಾ. ಚಿದಾನಂದ ಗೌಡರು ಪ್ರಮುಖರಾಗಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆದರೂ ಸಾಹಿತ್ಯದಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿರುವ ಡಾ. ಚಿದಾನಂದಗೌಡರು ಕಾಯಕವೇ ಕೈಲಾಸ ತತ್ವವನ್ನು ತಮ್ಮ ಜೀವನದ ಆದರ್ಶವನ್ನಾಗಿ, ಮೌಲ್ಯವನ್ನಾಗಿ ಮಾಡಿಕೊಂಡವರಾಗಿದ್ದಾರೆ.
- ಡಾ. ಎಂ. ಜಿ. ಆರ್. ಅರಸ್