ಶ್ರೀರಾಮ-ಸೀತೆ-ರಾಮಾಯಣ ಈ ಶಬ್ದಗಳು ಕಿವಿಗೆ ಬೀಳುತ್ತಿದ್ದಂತೆಯೇ ಬಹು ಮಂದಿ ಭಾರತೀಯರ ಮನಸ್ಸು ಭಕ್ತಿಯ ಸಂವೇದನೆಗೆ ಒಳಗಾಗುತ್ತದೆ. ಅಷ್ಟೇ ಅಲ್ಲ! ರಾಮ-ರಾಮಾಯಣಗಳ ಹೆಸರು ಭಾರತೀಯರ ದೈನಂದಿನ ವ್ಯವಹಾರಗಳಲ್ಲಿ ಕೂಡ ಹಾಸುಹೊಕ್ಕಾಗಿ ಸೇರಿಹೋಗಿದೆ. ಅನೇಕ ಮಂದಿ ಭಾವುಕರು ಆಗಿಂದಾಗ್ಯೆ ರಾಮಸ್ಮರಣೆ ಮಾಡುತ್ತಿರುವುದುಂಟು. ಯಾವುದೋ ಉದ್ವೇಗದ ಸ್ಥಿತಿ ಕಳೆದು ಮನಸ್ಸಿಗೆ ನಿರಾಳವೆನಿಸಿದಾಗೆ ರಾಮನ ಸ್ಮರಣೆ ಉಂಟಾಗುತ್ತದೆ.#NRanganathasharma