‘Aa hadinentu dinagalu’

· KK PRINTERS &PUBLISHERS
4.6
10 ವಿಮರ್ಶೆಗಳು
ಇ-ಪುಸ್ತಕ
152
ಪುಟಗಳು

ಈ ಇ-ಪುಸ್ತಕದ ಕುರಿತು

ಭಾರತ ದೇಶದಲ್ಲಿ ಮಹಾಭಾರತದ ಬಗ್ಗೆ ಕೇಳಿಲ್ಲದವರೇ ಇಲ್ಲ. ಈ ಮಹಾಕಾವ್ಯದ ಕತೆ, ಪಾತ್ರಗಳು ಮತ್ತು ಸನ್ನಿವೇಶಗಳನ್ನು ಬಾಲ್ಯದಿಂದಲೂ ಕೇಳಿ, ಓದಿ, ಅಧ್ಯಯನ ಮಾಡಿ ಎಲ್ಲರಿಗೂ ಅದರ ಬಗ್ಗೆ ಸಹಜ ಜ್ಞಾನವಿದೆಯೇನೋ ಅನ್ನುವಷ್ಟರ ಮಟ್ಟಿಗೆ ಇದು ಪ್ರಚಲಿತವಾಗಿದೆ. ಆದರೂ, ಮಹಾಭಾರತದ ಬಗ್ಗೆ ಎಲ್ಲರೂ ತಿಳಿದಿರುವುದು ಬಹಳಷ್ಟು ಕಡಿಮೆಯೇ ಆಗಿರುತ್ತದೆ. ಏಕೆಂದರೆ ಹದಿನೆಂಟು ಪರ್ವಗಳಲ್ಲಿ ಒಂದು ಲಕ್ಷ ಶ್ಲೋಕಗಳಲ್ಲಿ ಬೃಹತ್ತಾಗಿ ವ್ಯಾಪಿಸಿಕೊಂಡಿರುವ ಅದನ್ನು ಆಮೂಲಾಗ್ರವಾಗಿ ಓದಿರುವವರು ಬಹಳ ಕಡಿಮೆ. ಪಾಂಡವರ ಹುಟ್ಟು, ಬೆಳವಣಿಗೆ, ಬಾಲ್ಯ, ವಿದ್ಯಾಭ್ಯಾಸ, ಧೃತರಾಷ್ಟçನ ಮಕ್ಕಳ ದಾಯಾದಿ ಮಾತ್ಸರ್ಯ, ಪಾಂಡು ಸುತರನ್ನು ಮುಗಿಸಿ ಬಿಡಲು ಅವರು ಹೂಡುವ ಸಂಚುಗಳು, ಯುಧಿಷ್ಠಿರಾದಿಗಳು ಆ ಸಂಚುಗಳಿAದ ಗೆದ್ದು ಬರುವುದು, ದ್ರೌಪತಿಯ ಸ್ವಯಂವರ, ಪಾಂಡವರು ಪಡುವ ವನವಾಸ ಅಜ್ಞಾತವಾಸಗಳ ಕಷ್ಟಗಳು - ಹೀಗೆ ಕಥೆಯ ಒಂದೊAದು ಘಟ್ಟವೂ ಒಂದೊAದು ಬೃಹತ್ಗçಂಥವಾಗಲು ಯೋಗ್ಯವಿದ್ದು ಜನಸಾಮಾನ್ಯರಿಗೆ ತಲುಪುತ್ತಿರುವುದು ಮುಷ್ಟಿಯಷ್ಟು ಸಾರವಷ್ಟೆ.

ಮಹಾಭಾರತ ಯುದ್ಧವೆಂದೇ ಹೆಸರುವಾಸಿಯಾಗಿರುವ ಪಾಂಡವ ಕೌರವರ ಯುದ್ಧವೂ ಆ ಮಹಾಕಾವ್ಯದ ಒಂದು ಅತಿ ಮುಖ್ಯ ಘಟಕವೆ. ಆ ಯುದ್ಧವು ಜಗತ್ತಿನಲ್ಲಿ ಈವರೆವಿಗೆ ನಡೆದಿರುವ ಎಲ್ಲ ಯುದ್ಧಗಳಿಗಿಂತಲೂ ಅತಿಘೋರವಾದುದು, ಅತಿ ಭಯಂಕರವಾದುದು ಮತ್ತು ಅತಿ ಭೀಕರವಾದುದು ಎಂದು ಹೇಳಲಾಗಿದೆ. ಆ ಯುದ್ಧದಲ್ಲಿ ದುರ್ಯೋಧನನ ಪಕ್ಷದಲ್ಲಿ ಹನ್ನೊಂದು ಅಕ್ಷೌಹಿಣಿ ಸೈನ್ಯವೂ, ಯುಧಿಷ್ಠಿರನ ಪಕ್ಷದಲ್ಲಿ ಏಳು ಅಕ್ಷೌಹಿಣಿ ಸೈನ್ಯವೂ ಭಾಗಿಯಾಗಿದ್ದವಂತೆ.

ಆ ಹದಿನೆಂಟು ದಿನಗಳ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದ ವೀರ ಯೋಧರ ಪರಾಕ್ರಮಗಳು, ಅವರು ಮಾಡಿದ ಕಗ್ಗೊಲೆಗಳು, ಯುದ್ಧಭೂಮಿಯಲ್ಲಿ ಬಿದ್ದಿದ್ದ ಹೆಣಗಳ ರಾಶಿ, ಹರಿದು ಬಿದ್ದಿದ್ದ ಕವಚಗಳು, ಮುರಿದು ಬಿದ್ದಿದ್ದ ತೋಳುಗಳು, ತರಿದು ಬೀಳಿಸಲ್ಪಟ್ಟಿದ್ದ ತಲೆಗಳು, ಸತ್ತ ಆನೆಗಳ, ಕುದುರೆಗಳ ಶವಗಳು, ನದಿಯಂತೆ ಹರಿದಿದ್ದ ನೆತ್ತರು, ಕ್ಷತವಾಗಿದ್ದ ರಥಗಳು, ಧನುಸ್ಸುಗಳು, ಬಾಣಗಳು, ಕತ್ತಿ ಕಠಾರಿಗಳು, ಕೊಡಲಿಗಳು, ಬಲ್ಲೆಗಳು, ತೋಮರಗಳು, ಧ್ವಜ ಪತಾಕೆಗಳು - ಇವುಗಳ ವರ್ಣನೆಯು ಮೈನವಿರೇಳಿಸುತ್ತದೆ. 

ಮಹಾಕೃತಿಯ ಪಾತ್ರಗಳನ್ನೂ, ಸನ್ನಿವೇಶಗಳನ್ನೂ ಬೇರೆಬೇರೆ ಭೂ ಭಾಗಗಳÀಲ್ಲಿ ಬೇರೆಬೇರೆ ಕವಿಗಳು ತಮ್ಮ ನೆಲದ ಸಂಸ್ಕೃತಿಗೆ ಹೊಂದಿಸಿಕೊAಡೋ, ತಮ್ಮ ಮನೋಧರ್ಮಕ್ಕೆ ತಕ್ಕಂತೆ ಬಳಸಿಕೊಂಡೋ, ರಚಿಸಿಕೊಂಡ ಕೃತಿಗಳಿಂದಾಗಿ ಮೂಲಕಥೆಯನ್ನು ಮೀರಿದ ಎಷ್ಟೋ ಅಂಶಗಳು ಇಂದು ಪ್ರಚಲಿತವಿವೆ. ಕೆಲವು ಮಾಧ್ಯಮಗಳು ಬಿಂಬಿಸಿರುವ ಅಂಶಗಳನ್ನು ನೋಡಿದರೆ ಮಹಾಭಾರತದಲ್ಲಿನ ವೀರರು ವಸ್ತುರೂಪದ ಬಾಣಗಳನ್ನು ಬಳಸುತ್ತಲೇ ಇರಲಿಲ್ಲವೇನೋ, ಅವರು ಬಿಲ್ಲನ್ನು ಹಿಡಿದು ಮರ‍್ವಿಯನ್ನು ಎಳೆಯುತ್ತಿದ್ದ ಹಾಗೆಯೇ ಬಾಣವೊಂದು ಉದ್ಭವಿಸುತ್ತಿತ್ತೇನೋ ಅನ್ನಿಸುವಂತಾಗಿದೆ. ವಾಸ್ತವವಾಗಿ ಒಬ್ಬೊಬ್ಬ ಮಹಾರಥಿಯ ರಥದ ಹಿಂದೆ ಬಾಣಗಳನ್ನು ತುಂಬಿದ ಎಷ್ಟೋ ಬಂಡಿಗಳು ಸಾಗಿರುತ್ತಿದ್ದವಂತೆ. ಅಶ್ವತ್ಥಾಮನ ರಥದ ಹಿಂದೆ ಬಾಣಗಳನ್ನು ತುಂಬಿದ ಎಂಟನೂರು ಬಂಡಿಗಳು ಇದ್ದವು ಎಂದು ಒಂದು ಕಡೆ ಹೇಳಲಾಗಿದೆ. 

ಆ ಯುದ್ಧದಲ್ಲಿ ಭಾಗಿಗಳಾದ ಅರ್ಜುನ, ಯುಧಿಷ್ಠಿರ, ಭೀಮ, ಕರ್ಣ, ದುರ್ಯೋಧನ, ದ್ರೋಣ, ಕೃಪ, ಅಶ್ವತ್ಥಾಮ ಮುಂತಾದವರೆಲ್ಲ ಮೈತುಂಬಾ ಬಾಣಗಳನ್ನು ಚುಚ್ಚಿಸಿಕೊಂಡು, ಗಾಯಗೊಂಡು, ಬಳಲಿ, ಮೂರ್ಛಿತರಾದ ಸನ್ನಿವೇಶಗಳು ಎಷ್ಟೋ ಇವೆ. ಬಾಣಾಘಾತಗಳು ಮತ್ತು ಗಾಯಗಳು ಕೃಷ್ಣನನ್ನೂ ಬಿಟ್ಟಿರಲಿಲ್ಲ. ಮಹಾಭಾರತದಲ್ಲಿನ ಇಂತಹ ಬಹಳಷ್ಟು ವಾಸ್ತವಾಂಶಗಳು ಬರುಬರುತ್ತ ಅಲೌಕಿಕವಾಗಿ ವಿಜೃಂಭಿಸಲ್ಪಟ್ಟಿವೆ.

ಭೀಬತ್ಸವಾದ ಆ ಯುದ್ಧದ ಸಾರಾಂಶವನ್ನು ಹಿಡಿದು ವಿಸ್ತೃತಗೊಳಿಸದೆ, ಉತ್ಪೆçÃಕ್ಷೆಗೊಳಿಸದೆ, ಒಗ್ಗರಣೆ ಹಾಕದೆ, ಕೆಲವೇ ಪುಟಗಳಲ್ಲಿ ಕೂಡಿಡುವ ಒಂದು ಕಿರುಪ್ರಯತ್ನವಾಗಿ ಈ ಕೃತಿ, ‘ಆ ಹದಿನೆಂಟು ದಿನಗಳು’ ವನ್ನು ಓದುಗರ ಮಡಿಲಿಗಿಡಲಾಗಿದೆ.

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.6
10 ವಿಮರ್ಶೆಗಳು

ಲೇಖಕರ ಕುರಿತು

ಆ ಹದಿನೆಂಟು ದಿನಗಳ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದ ವೀರ ಯೋಧರ ಪರಾಕ್ರಮಗಳು, ಅವರು ಮಾಡಿದ ಕಗ್ಗೊಲೆಗಳು, ಯುದ್ಧಭೂಮಿಯಲ್ಲಿ ಬಿದ್ದಿದ್ದ ಹೆಣಗಳ ರಾಶಿ, ಹರಿದು ಬಿದ್ದಿದ್ದ ಕವಚಗಳು, ಮುರಿದು ಬಿದ್ದಿದ್ದ ತೋಳುಗಳು, ತರಿದು ಬೀಳಿಸಲ್ಪಟ್ಟಿದ್ದ ತಲೆಗಳು, ಸತ್ತ ಆನೆಗಳ, ಕುದುರೆಗಳ ಶವಗಳು, ನದಿಯಂತೆ ಹರಿದಿದ್ದ ನೆತ್ತರು, ಕ್ಷತವಾಗಿದ್ದ ರಥಗಳು, ಧನುಸ್ಸುಗಳು, ಬಾಣಗಳು, ಕತ್ತಿ ಕಠಾರಿಗಳು, ಕೊಡಲಿಗಳು, ಬಲ್ಲೆಗಳು, ತೋಮರಗಳು, ಧ್ವಜ ಪತಾಕೆಗಳು - ಇವುಗಳ ವರ್ಣನೆಯು ಮೈನವಿರೇಳಿಸುತ್ತದೆ. 

ಮಹಾಕೃತಿಯ ಪಾತ್ರಗಳನ್ನೂ, ಸನ್ನಿವೇಶಗಳನ್ನೂ ಬೇರೆಬೇರೆ ಭೂ ಭಾಗಗಳÀಲ್ಲಿ ಬೇರೆಬೇರೆ ಕವಿಗಳು ತಮ್ಮ ನೆಲದ ಸಂಸ್ಕೃತಿಗೆ ಹೊಂದಿಸಿಕೊAಡೋ, ತಮ್ಮ ಮನೋಧರ್ಮಕ್ಕೆ ತಕ್ಕಂತೆ ಬಳಸಿಕೊಂಡೋ, ರಚಿಸಿಕೊಂಡ ಕೃತಿಗಳಿಂದಾಗಿ ಮೂಲಕಥೆಯನ್ನು ಮೀರಿದ ಎಷ್ಟೋ ಅಂಶಗಳು ಇಂದು ಪ್ರಚಲಿತವಿವೆ. ಕೆಲವು ಮಾಧ್ಯಮಗಳು ಬಿಂಬಿಸಿರುವ ಅಂಶಗಳನ್ನು ನೋಡಿದರೆ ಮಹಾಭಾರತದಲ್ಲಿನ ವೀರರು ವಸ್ತುರೂಪದ ಬಾಣಗಳನ್ನು ಬಳಸುತ್ತಲೇ ಇರಲಿಲ್ಲವೇನೋ, ಅವರು ಬಿಲ್ಲನ್ನು ಹಿಡಿದು ಮರ‍್ವಿಯನ್ನು ಎಳೆಯುತ್ತಿದ್ದ ಹಾಗೆಯೇ ಬಾಣವೊಂದು ಉದ್ಭವಿಸುತ್ತಿತ್ತೇನೋ ಅನ್ನಿಸುವಂತಾಗಿದೆ. ವಾಸ್ತವವಾಗಿ ಒಬ್ಬೊಬ್ಬ ಮಹಾರಥಿಯ ರಥದ ಹಿಂದೆ ಬಾಣಗಳನ್ನು ತುಂಬಿದ ಎಷ್ಟೋ ಬಂಡಿಗಳು ಸಾಗಿರುತ್ತಿದ್ದವಂತೆ. ಅಶ್ವತ್ಥಾಮನ ರಥದ ಹಿಂದೆ ಬಾಣಗಳನ್ನು ತುಂಬಿದ ಎಂಟನೂರು ಬಂಡಿಗಳು ಇದ್ದವು ಎಂದು ಒಂದು ಕಡೆ ಹೇಳಲಾಗಿದೆ. 

ಆ ಯುದ್ಧದಲ್ಲಿ ಭಾಗಿಗಳಾದ ಅರ್ಜುನ, ಯುಧಿಷ್ಠಿರ, ಭೀಮ, ಕರ್ಣ, ದುರ್ಯೋಧನ, ದ್ರೋಣ, ಕೃಪ, ಅಶ್ವತ್ಥಾಮ ಮುಂತಾದವರೆಲ್ಲ ಮೈತುಂಬಾ ಬಾಣಗಳನ್ನು ಚುಚ್ಚಿಸಿಕೊಂಡು, ಗಾಯಗೊಂಡು, ಬಳಲಿ, ಮೂರ್ಛಿತರಾದ ಸನ್ನಿವೇಶಗಳು ಎಷ್ಟೋ ಇವೆ. ಬಾಣಾಘಾತಗಳು ಮತ್ತು ಗಾಯಗಳು ಕೃಷ್ಣನನ್ನೂ ಬಿಟ್ಟಿರಲಿಲ್ಲ. ಮಹಾಭಾರತದಲ್ಲಿನ ಇಂತಹ ಬಹಳಷ್ಟು ವಾಸ್ತವಾಂಶಗಳು ಬರುಬರುತ್ತ ಅಲೌಕಿಕವಾಗಿ ವಿಜೃಂಭಿಸಲ್ಪಟ್ಟಿವೆ.

ಈ ಇ-ಪುಸ್ತಕಕ್ಕೆ ರೇಟಿಂಗ್ ನೀಡಿ

ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.

ಮಾಹಿತಿ ಓದುವಿಕೆ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌‌ಗಳು
Android ಮತ್ತು iPad/iPhone ಗೆ Google Play ಪುಸ್ತಕಗಳ ಅಪ್ಲಿಕೇಶನ್‌ ಇನ್‌ಸ್ಟಾಲ್ ಮಾಡಿ. ಇದು ನಿಮ್ಮ ಖಾತೆಯನ್ನು ಸ್ವಯಂಚಾಲಿತವಾಗಿ ಸಿಂಕ್‌ ಮಾಡುತ್ತದೆ ಮತ್ತು ನೀವು ಎಲ್ಲೇ ಇರಿ ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಪುಸ್ತಕಗಳನ್ನು ಓದಲು ಅನುಮತಿಸುತ್ತದೆ.
ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳು
Google Play ನಲ್ಲಿ ಖರೀದಿಸಿದ ಆಡಿಯೋಬುಕ್‌ಗಳನ್ನು ನಿಮ್ಮ ವೆಬ್‌ ಬ್ರೌಸರ್‌ನ ಕಂಪ್ಯೂಟರ್‌ನ ಲ್ಲಿ ಆಲಿಸಬಹುದು.
eReaders ಮತ್ತು ಇತರ ಸಾಧನಗಳು
Kobo ಇ-ರೀಡರ್‌ಗಳಂತಹ ಇ-ಇಂಕ್ ಸಾಧನಗಳ ಕುರಿತು ಓದಲು, ನೀವು ಫೈಲ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಅದನ್ನು ನಿಮ್ಮ ಸಾಧನಕ್ಕೆ ವರ್ಗಾಯಿಸಬೇಕು. ಫೈಲ್‌ಗಳು ಮತ್ತು ಬೆಂಬಲಿತ ಇ-ರೀಡರ್‌ಗಳನ್ನು ವರ್ಗಾವಣೆ ಮಾಡಲು ವಿವರವಾದ ಸಹಾಯ ಕೇಂದ್ರ ಸೂಚನೆಗಳನ್ನು ಅನುಸರಿಸಿ.