ಇದು ಪತ್ತೇದಾರ ಜೋಡಿ- ವಿಜಯ್- ವಿಕ್ರಮರ ತನಿಖೆಯ ಸರಣಿಯಲ್ಲಿ ಎರಡನೇ ಪ್ರತ್ಯೇಕ ಕತೆಯಾಗಿದೆ. ಈಗಾಗಲೇ ಈ ನಿಸ್ಸೀಮ ಜೋಡಿಯ ಪರಿಶೋಧನೆ ಮತ್ತು ಸಾಹಸವನ್ನು ‘ಕರಾಳ ಗರ್ಭ’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ‘ಅಬಲೆಯ ಬಲೆ’ ಎಂಬ ’ಪನ್’ ಶೀರ್ಷಿಕೆ ಇಟ್ಟಿರುವುದಕ್ಕೂ ಕತೆಯಲ್ಲಿ ಬಲವಾದ ಕಾರಣವಿದೆ. ಇದು ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ತಲೆಬರಹದಲ್ಲಿ ಕಾಣಿಸಿಕೊಳ್ಳುವ ‘ಮನಿ ಲಾಂಡರಿಂಗ್’ ( ಅಕ್ರಮ ಹಣ ವಹಿವಾಟು) ವಿವಾದದ ಸುತ್ತ ಹೆಣೆದ ಓರ್ವ ಅಸಹಾಯಕ ತಾಯಿಯ ನಿಗೂಢ ಕತೆ. ಈಕೆ ಮತ್ತು ಪತ್ತೇದಾರರು ಹೇಗೆ ಚಿತ್ರರಂಗ ಮತ್ತು ಬ್ಯಾಂಕಿಂಗ್ ಎರಡನ್ನೂ ಸುತ್ತಿರುವ ಕರಾಳ ದಂಧೆಯ ಮುಸುಕನ್ನು ಸರಿಸಬಲ್ಲರು ಎಂಬುದೇ ಸ್ವಾರಸ್ಯ ಕತೆ.