Ajji Kareda Haagaayitu: ಅಜ್ಜಿ ಕರೆದ ಹಾಗಾಯಿತು: ಕತೆಗಳು

Akshara Prakashana
E-bok
60
Sider

Om denne e-boken

ತಮ್ಮ ಕಥೆಗಳ ಮೂಲಕ ಈ ಲೋಕದ ಬಾಲ್ಯಗಳನ್ನು ಬೆಳಗಿಸಿದ ಅಜ್ಜಮ್ಮಂದಿರ ಸಂಪ್ರದಾಯದಿಂದ ಪ್ರೇರಣೆ ಪಡೆದು, ಹೊಸಗಾಲದ ವಸ್ತು-ವಿಚಾರ-ವಿನ್ಯಾಸಗಳನ್ನು ಮನಸ್ಸಲ್ಲಿ ಇಟ್ಟುಕೊಂಡು ಕಟ್ಟಿದ ಮೂವತ್ತು ಕಿರು ಕಥನಗಳು ಇಲ್ಲಿವೆ. ಈ ಕತೆಗಳು ಒಂದೊಂದೂ ಬೇರೆ ಬಗೆಯದೇ ಆಗಿದ್ದರೂ ಇವುಗಳ ನಡುವೆ ಕೆಲವು ಸಾಮ್ಯಗಳೂ ಇವೆ. ಅಂಥ ಒಂದು ಸಮಾನ ಗುಣವೆಂದರೆ ಇಲ್ಲಿಯ ಬಹುತೇಕ ಕತೆಗಳು ಪುಟ್ಟ ಪುಟ್ಟ ಭಾವಗೀತೆಗಳ ಹಾಗಿವೆ. ಇವತ್ತಿನ ಕಾಲದೇಶಗಳಲ್ಲಿ ಇದ್ದೂ ಅದನ್ನು ಮೀರುವ ಹಾಗೂ ಹೇಳಬೇಕಾದ್ದನ್ನು ತಮ್ಮ ಎರಡು ಸಾಲಿನ ನಡುವಿನ ಮೌನದ ಮೂಲಕವೇ ಹೇಳುವ ಆಪ್ತ ಪ್ರಯೋಗ ಈ ಕಥೆಗಳಲ್ಲಿದೆ…

A Kannada book by Akshara Prakashana / ಅಕ್ಷರ ಪ್ರಕಾಶನ

Om forfatteren

ಸವಿತಾ ನಾಗಭೂಷಣ ಅವರು 11 ಮೇ 1961ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ಶಿವಮೊಗ್ಗಾದಲ್ಲಿ ಪದವಿ ಪೂರೈಸಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅವರು ಮುಕ್ತವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಕಾಲೀನ ಕನ್ನಡ ಕಾವ್ಯದ ಪ್ರಮುಖರಲ್ಲೊಬ್ಬರೆಂದು ಪರಿಗಣಿತವಾಗಿರುವ ಇವರು 'ಸ್ತ್ರೀಲೋಕ' ಎಂಬ ವಿಶಿಷ್ಟ ರೂಪದ ಕಾದಂಬರಿಯನ್ನೂ ರಚಿಸಿದ್ದಾರೆ. 'ನಾ ಬರುತ್ತೇನೆ ಕೇಳು', 'ಚಂದ್ರನನ್ನು ಕರೆಯಿರಿ ಭೂಮಿಗೆ', 'ಹೊಳೆಮಗಳು', 'ಜಾತ್ರೆಯಲ್ಲಿ ಶಿವ', 'ದರುಶನ' - ಇವು ಇದುವರೆಗೆ ಪ್ರಕಟವಾಗಿರುವ ಅವರ ಕವನಸಂಕಲನಗಳು. 'ಆಕಾಶ ಮಲ್ಲಿಗೆ', 'ಕಾಡು ಲಿಲ್ಲಿ ಹೂವುಗಳು' - ಎಂಬ ಇವರ ಎರಡು ಕವಿತಾ ಸಂಕಲನಗಳೂ ಈವರೆಗೆ ಹೊರಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಬಹುಮಾನ, ಎಂ.ಕೆ. ಇಂದಿರಾ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಕಾವ್ಯಪ್ರಶಸ್ತಿ, ವಾರಂಬಳ್ಳಿ ಕಾವ್ಯಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯಪ್ರಶಸ್ತಿ ಮೊದಲಾದ ಹಲವು ಮನ್ನಣೆಗಳಿಗೆ ಪಾತ್ರರಾಗಿರುವ ಇವರು ಸದ್ಯ ಸ್ವಯಮಿಚ್ಛೆಯ ನಿವೃತ್ತಿ ಪಡೆದು ಶಿವಮೊಗ್ಗೆಯಲ್ಲಿ ನೆಲೆಸಿದ್ದಾರೆ.

Vurder denne e-boken

Fortell oss hva du mener.

Hvordan lese innhold

Smarttelefoner og nettbrett
Installer Google Play Bøker-appen for Android og iPad/iPhone. Den synkroniseres automatisk med kontoen din og lar deg lese både med og uten nett – uansett hvor du er.
Datamaskiner
Du kan lytte til lydbøker du har kjøpt på Google Play, i nettleseren på datamaskinen din.
Lesebrett og andre enheter
For å lese på lesebrett som Kobo eReader må du laste ned en fil og overføre den til enheten din. Følg den detaljerte veiledningen i brukerstøtten for å overføre filene til støttede lesebrett.