ಈ ಇ-ಪುಸ್ತಕವನ್ನು ಸಂಕಥನ ಪ್ರಕಟಿಸಿದೆ.
--
“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”
ಎಚ್ ಎಸ್ ಶಿವಪ್ರಕಾಶ
ಕವಿ, ನಾಟಕಕಾರ, ಅನುವಾದಕ, 1954ರಲ್ಲಿ ಬೆಂಗಳೂರಿನಲ್ಲಿ ಜನನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ತುಮಕೂರು ಮತ್ತು ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ದೈಮಾಸಿಕ 'ಇಂಡಿಯನ್ ಲಿಟರೇಚರ್'ನ ಸಂಪಾದಕರಾಗಿ, ದೆಹಲಿಯ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ ಟ್ಯಾಗೋರ್ ಕೇಂದ್ರದ ನಿರ್ದೇಶಕರು. “ಮಿಲರೇಪ' ಇವರ ಮೊದಲ ಕವನ ಸಂಕಲನ, 'ಮಳೆ ಬಿದ್ದ ನೆಲದಲ್ಲಿ, “ಮತ್ತೆ ಮತ್ತೆ”, “ಅಣು ಕ್ಷಣ ಚರಿತೆ', 'ಮಳೆಯ ಮಂಟಪ', 'ಮಲ್ಲಿನ ಹಾಗೆ ಕಣಿವೆಯಾಸಿ' ಇವರ ಪ್ರಮುಖ ಕವನ ಸಂಕಲನಗಳು, 'ಮಹಾಚೈತ, 'ಸುಲ್ತಾನ್ ಟಿಪ್ಪು, 'ಮಂಟೇಸ್ವಾಮಿ', 'ಸತಿ', 'ಮದುವೆ ಹೆಣ್ಣು ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಸಾಹಿತ್ಯ ಅಕಾಡೆಮಿ ಬಹುಮಾನ, ಸಂಗೀತ ನಾಟಕ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ಹುಟ್ಟಿದ್ಸು ಮೆದ್ಲಿನ್-ಕೊಲಂಬಿಯಾ (೧೯೯೩)
ಸಂಗೀತ ಇತಿಹಾಸದ ವಿದ್ಯಾರ್ಥಿನಿ. ಸಾಕ್ಸಫೋನ್ ವಾದಕಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕಿ. ಉಪನ್ಯಾಸಕಾರ್ತಿ, ಬರಹಗಾರ್ತಿ ಮತ್ತು ಸಂಪಾದಕಿ. ಇವರ ಕವಿತೆಗಳು ಹಲವು ನಿಯತಕಾಲಿಕಗಳಲ್ಲಿ, ಮಾಧ್ಯಮಗಳಲ್ಲಿ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟಿತ. ಹಲವು ಸ್ಥಳೀಕ, ರಾಷ್ಟ್ರೀಯ, ಅಂತರರಾಷ್ಚ್ರೀಯ ಕವಿಮೇಳಗಳಲ್ಲಿ ಕಾವ್ಯವಾಚನ. ಇವರ ಕವಿತೆಗಳು ಅರಬಿ, ಇಂಗ್ಲಿಷ್, ಫ್ರೆಂಚ್, ಇತಾಲಿಯಾನಾ, ಇಂಗ್ಲಿಷ್, ವಿಯತ್ನಾಮಿ, ನೇಪಾಳಿ ಮತ್ತು ಕನ್ನಡ ಭಾಷೆಗಳಲ್ಲಿ, ಅನುವಾದಿತ. ವಿಯತ್ನಾಂ, ಈಜಿಪ್ಟು ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲು ಪ್ರಸಾರಿತ. ಮೂರು ಕವಿತಾ ಸಂಗ್ರಹಗಳು: ಎನ್ಸನ್ಯಸೊನೆಸ್ ಹ್ರೀಸಿಸ್’,(೧೯೧೮) ಹಾರ್ದಿನ್ ದಿ ಒನೆಕ್ಸ(೨೦೨೦) ಮತ್ತು ಒಂದು ವ್ಯಕ್ತಿಗತ ಕವಿತೆಗಳ ಆಂಥಾಲಜಿ ‘ಫೊತಾಗ್ರಫಿಯಾ ದೆವ್ ವಾಚಿಯೋ’ (೨೦೨೦)