ವಿಷಯ ವ್ಯಸನಗಳ ಕಳೆದು ಹಸನಾದ ಹಾದಿ ತೋರಿದ ಪೂಜ್ಯಗುರುವರ ಶ್ರೀ ಗುರುಬಸಪ್ಪಜ್ಜನವರು ಆ ಜಿಲ್ಲೆಯು ನೀಡಿದ ಅತ್ಯುತ್ತಮ ಮುತ್ತು. ಹಳ್ಳಿಯ ಸೊಗಡಿನಲ್ಲಿ ಬೆಳೆದು ಸುಜ್ಞಾನಿಯಾಗಿ ಕಾಯಕ ಯೋಗಿಯಾಗಿ ವಿಜೃಂಭಿಸಿದ್ದಾರೆ. ಲೋಕ ವಂದ್ಯರಾಗಿದ್ದಾರೆ. ಅವರ ಮೈ ಮರೆಯಾದರೂ ಸಕಲರಿಂದ ಸೈ ಅನಿಸಿಕೊಳ್ಳುತ್ತಿರುವ ಸವಿಸಿಕೊಳ್ಳುತ್ತಿರುವ ಆ ಪರಮ ಪೂಜ್ಯರಿಂದ ಕನ್ನಡ ನಾಡು ಧನ್ಯತೆಯಿಂದ ಬೀಗುವಂತಾಗಿದೆ. ನೆಲೆನಿಂತ ಶಿಗ್ಲಿ ಸಗ್ಗವಾಯಿತು. ಅಂಥವರ ಚರಿತ್ರೆ ಕೇಳಬೇಕು ಓದಬೇಕು ಅನ್ನುವ ಅತುಲ ಬಯಕೆ ಭಕ್ತರದು.
ಇಪುಸ್ತಕ ಪ್ರಕಟಣೆ: ಲೀಲಾ ಪ್ರಕಾಶನ, ವಿಜಯಪುರ
This book has been published by Leela Prakashana.
This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.
ಶ್ರೀ ಆರ್. ಎಂ. ಹೊನಕೇರಿಯವರು ಅಧುನಿಕ ದಿನಮಾನಗಳಲ್ಲೂಶಿಗ್ಲಿಯ ಆಧ್ಯಾತ್ಮ ವಲಯವನ್ನು ಜೀವಂತವಾಗಿರಿಸಿರುವ ಹಿರಿಯರಲ್ಲಿ ಪ್ರಮುಖರು. ನೌಕರಿ ಮಾಡಲೆಂದು ಶಿಗ್ದಿಗೆ ಬಂದು ಇಲ್ಲಿಯೇ ನೆಲೆಸಿರುವ ಇವರು ತಮ್ಮ ಬರಹ ಮತ್ತು ಕೃತಿಗಳಲ್ಲಿ ಈ ಊರಿನ ಸತ್ವ ವನ್ನೇ ಹಿಡಿದಿಟ್ಟು ಇತಿಹಾಸ ದಾಖಲಿಸಿರುವ ಶ್ಲ್ಯಾಘನೀಯರು. ನಮ್ಮೂರಿನ ಪುಣ್ಯ ಪುರುಷರಲ್ಹೊಬ್ಬರಾದ ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಗಾಂಧಿವಾದಿ ದಿ. ಬಸವಕುಮಾರರ ಕುರಿತು ಕೃತಿ ರಚಿಸಿದ ಹೊನಕೇರಿಯವರು ಇದೀಗ ಇಚ್ಛಾಮರಣಿ ಗುರುಬಸಪ್ಪಜ್ಜ ದಂಪತಿಗಳ ಬಗ್ಗೆ ಹೊತ್ತಿಗೆ ಹೊರತರುವ ಮಹತ್ಕಾರ್ಯ ಮಾಡಿದ್ದಾರೆ. ಈ ಹೊತ್ತಿಗೆಯಲ್ಲಿ " ಶಿಗ್ಲಿಯ ಶಬ್ದೋತ್ಪತ್ತಿ ಬಗ್ಗೆ ಹೇಳುತಲೇ ಸೇವಾಮಂದಿರದ ವೀರಪ್ಪಜ್ಜನವರ ಬಗೆಗೂ ವಿವರಣೆ ನೀಡಿರುವದು ತುಂಬ ಉಚಿತವಾಗಿಯೇ ಇದೆ.