'ನಿರ್ಮಲ ಭಾರತೀ' ಎಂದರೆ ತಿಳಿಯಾದ ಮಾತು ಎಂದೂ ಅರ್ಥವಾಗುತ್ತದೆ. ಚಿಕ್ಕ ಮಕ್ಕಳು ಮಹಾಭಾರತದ ಕಥೆಯನ್ನು ಸುಲಭವಾಗಿ ಓದಿ ನೆನಪಿಟ್ಟುಕೊಳ್ಳಲು ಎ. ಆರ್ ಕೃಷ್ಣಶಾಸ್ತ್ರಿಗಳು ಬರೆದ ವಚನ ಭಾರತದ ಸಂಕ್ಷಿಪ್ತ ರೂಪವೇ- ಅವರೇ ಬರೆದ- ನಿರ್ಮಲಭಾರತಿ. ಇದರಲ್ಲಿ ಬರುವ ರಾಮನ ಕಥೆ, ಸಾವಿತ್ರಿಯ ಕಥೆ, ನಳನ ಕಥೆ ಇಂಥವುಗಳು ಸುಲಭವಾಗಿ ಮಕ್ಕಳಿಗೆ ಅರ್ಥವಾಗುತ್ತದೆ- ನೆನಪಿನಲ್ಲಿ ಉಳಿಯುತ್ತವೆ. ತಮ್ಮ ಮೊಮ್ಮಕ್ಕಳನ್ನು ಮನಸ್ಸಿನಲ್ಲಿಟ್ಟು ಮಕ್ಕಳಿಗೋಸ್ಕರವೇ ಬರೆದ ಕೃತಿ.