ಸೌಂದರ್ಯ ತ್ರಿಕೂಟ, ಸಹಿತತೆಯಿಂದ ಸಾಹಿತ್ಯ, ಸಾಹಿತ್ಯ ಸಂಹಿತೆ, ರಸ, ರಸ ಭ್ರಾಂತಿ, ಕಾವ್ಯದ ಕೆಲಸ, ಷೇಕ್ಸ್ ಪಿಯರಿಗೆ ನಮಸ್ಕಾರ, ಮಹಾಭಾರತದ ಪಾತ್ರಗಳು, ಕಾವ್ಯವು ಸ್ವಭಾವೋಲ್ಲಾಸ ಈ ಪ್ರಬಂಧಗಳಲ್ಲಿ ಶ್ರೀ ಡಿ. ವಿ. ಜಿ.ಯವರು ಕಾವ್ಯದ ಸ್ವಭಾವ ರಸಾನುಭವಗಳಿಗೆ ಸಂಬಂಧಪಟ್ಟಂತೆ ವಿಷಯಗಳನ್ನು ವಿವೇಚಿಸಿದ್ದಾರೆ. ಈ ಸಂಗ್ರಹದ ಒಂದು ವಿಶೇಷವೆಂದರೆ ಕಾವ್ಯರಸಾನುಭೂತಿಗೆ ಉದಾಹರಣಪೂರ್ವಕವಾಗಿರುವ ‘ಮಹಾಭಾರತದ ಪಾತ್ರಗಳು’ ಎಂಬ ಅಪೂರ್ವವಾದ ಪ್ರಬಂಧ. ಈ ಪ್ರಬಂಧ ಲೇಖಕರು ಗೀತೋಪನ್ಯಾಸಗಳನ್ನು ಕೊಟ್ಟಾಗ ಅದಕ್ಕೆ ಭೂಮಿಕೆಯಾಗಬೇಕೆಂದು ಬರೆದುಕೊಂಡಿದ್ದ ಟಿಪ್ಪಣಿಗಳ ಸಂಗ್ರಹ. ಈ ಎಲ್ಲ ಪ್ರಬಂಧಗಳು ಈಗಾಗಲೇ ಜನಪ್ರಿಯವಾಗಿರುವ ‘ಸಾಹಿತ್ಯ ಶಕ್ತಿ’, ‘ಜೀವನ ಸೌಂದರ್ಯ ಮತ್ತು ಸಾಹಿತ್ಯ’ ಈ ಚಿರನೂತನ ಪ್ರಬಂಧಗಳ ಸಂಕಲನಕ್ಕೆ ಪೂರಕವಾದ ಗ್ರಂಥವಾಗುತ್ತದೆಯೆಂಬುದರಲ್ಲಿ ಸಂಶಯವಿಲ್ಲ.