'ವಚನ ಭಾರತ' ಹೆಸರಿಗೆ ತಕ್ಕಂತೆ ಗದ್ಯದಲ್ಲಿದೆ. ಇದರಲ್ಲಿ ಎಲ್ಲ ಹದಿನೆಂಟು ಪರ್ವಗಳ ಕಥಾವಿವರವಿದೆ. ಹೊಸಗನ್ನಡದ ಅತ್ಯಲ್ಪ ಸುಂದರ ಗದ್ಯಕಾರರಲ್ಲಿ ಡಾ॥ ಎ. ಆರ್. ಕೃಷ್ಣಶಾಸ್ತ್ರಿಗಳು ಪ್ರಮುಖರು. ವಿದ್ವತ್ - ಗಾಂಭೀರ್ಯವನ್ನಿಟ್ಟುಕೊಂಡೂ ಸುಲಭ ಶೈಲಿಯಲ್ಲಿ ರಸವತ್ತಾದ- ವಿವರಣಪೂರ್ವಕ ಕಥನ ವರ್ಣನಗಳನ್ನೂ, ಸ್ವಾರಸ್ಯೋಲ್ಲೇಖನವನ್ನೂ, ರಸವಿಮರ್ಶೆಯನ್ನೂ ಮಾಡುವಲ್ಲಿ ಶಾಸ್ತ್ರಿಗಳದು ಎತ್ತಿದ ಕೈ. ವಚನಭಾರತ- ಪ್ರತಿಯೊಬ್ಬ ಕನ್ನಡಿಗನೂ ಓದಲೇ ಬೇಕಾದ ಕೃತಿ.